ಮಂಗಳೂರು, ಜೂನ್ 12: ಗುಜರಾತನ ಅಹಮದಾಬಾದ್ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ (Ahmedabad Plane Crash) ಕರ್ನಾಟಕ (Karnataka) ಮೂಲದ ಸಹ ಪೈಲಟ್ ಕ್ಲೈವ್ ಕುಂದರ್ (Clive Kunder) ಮೃತಪಟ್ಟಿದ್ದಾರೆ. ಕರ್ನಾಟಕದ ಕರಾವಳಿ ಮೂಲದವಾರದ ಕ್ಲೈವ್ ಕುಂದರ್ ಅವರು ಮುಂಬೈನಲ್ಲಿ ವಾಸವಾಗಿದ್ದರು. ಕ್ಲೈವ್ ಕುಂದರ್ ಫಸ್ಟ್ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕ್ಲೈವ್ ಕುಂದರ್ ಅವರಿಗೆ 1100 ಗಂಟೆ ವಿಮಾನ ಹಾರಾಟ ನಡೆಸಿದ ಅನುಭವವಿತ್ತು. ಕ್ಲೈವ್ ಕುಂದರ್ ಅವರು ಪತನಗೊಂಡ ಏರ್ ಇಂಡಿಯಾದ AI-171 ವಿಮಾನದ ಕೋ ಪೈಲಟ್ ಆಗಿದ್ದರು. ಈ ದುರಂತದಲ್ಲಿ ಗುಜರಾತನ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 242 ಜನರು ಮೃತಪಟ್ಟಿದ್ದಾರೆ ಎಂದು ಅಹಮದಾಬಾದ್ ನಗರ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ. ಗುರುವಾರ (ಜೂ.12) ಅಹಮದಾಬಾದ್ ವಿಮಾನ ನಿಲ್ದಾಣದಿಂದ 242 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಐದೇ ನಿಮಿಷಕ್ಕೆ ಅಪಘತಕ್ಕೀಡಾಗಿದೆ. ಅತ್ಯಂತ ದುರದೃಷ್ಟಕರ ಘಟನೆ: ಸಿಎಂ ಸುಮಾರು 200ಕ್ಕೂ ಅಧಿಕ...
ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆ: ಜೂನ್ 12 ರಂದು ಎಲ್ಲಾ ಶಾಲೆ, ಅಂಗನವಾಡಿಗಳಿಗೆ ರಜೆ ಘೋಷಣೆ
ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು ಇದರ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗುರುವಾರ (ಜೂ.12) ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಸೋಮವಾರದಿಂದ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು ಹವಾಮಾನ ಇಲಾಖೆ ಗುರುವಾರ ರೆಡ್ ಅಲರ್ಟ್ ಘೋಷಣೆ ಮಾಡಿದ್ದು ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಅಂಗನವಾಡಿಯಿಂದ ಹಿಡಿದು ಪ್ರೌಢ ಶಾಲೆಯವರೆಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.
Karnataka Rain Alert: ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್ ಅಲರ್ಟ್
ಬೆಂಗಳೂರು, (ಜೂನ್ 11): ಕರ್ನಾಟಕದಲ್ಲಿ (Karnataka) ಮುಂಗಾರು ಚುರುಕುಗೊಂಡಿದ್ದು, ರಾಜ್ಯ ವಿವಿದೆಡೆ ಭಾರೀ ಮಳೆಯಾಗುತ್ತಿದೆ. ಇನ್ನು ಮುಂದಿನ ಐದು ದಿನಗಳವರೆಗೆ ರಾಜ್ಯಾದ್ಯಂತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಾಳೆಯಿಂದ ಅಂದರೆ ಜೂನ್ 16ರವರೆಗೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಮಳೆಯಾಗಲಿದೆ ಎಂದು ತಿಳಿಸಿದ್ದು, ವಿವಿಧ ಜಿಲ್ಲೆಗಳಲ್ಲಿ ರೆಡ್ ಅಲರ್ಟ್, ಯೆಲ್ಲೋ ಅಲರ್ಟ್ ಹಾಗೂ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ #ಕರ್ನಾಟಕ ರಾಜ್ಯದ ಮುಂದಿನ 5 ದಿನಗಳ #ಮಳೆ #ಮುನ್ಸೂಚನೆ ನಕ್ಷೆಗಳು, ಜಿಲ್ಲಾವಾರು ಎಚ್ಚರಿಕೆಗಳೊಂದಿಗೆ. ಮೂಲ: ಐಎಂಡಿ ಬೆಂಗಳೂರು #KSNDMC #ಮುಂಗಾರುಮಳೆ #ಸುರಕ್ಷಿತವಾಗಿರಿ #ಎಚ್ಚರಿಕೆವಹಿಸಿ pic.twitter.com/7F1StNZuYj — Karnataka State Natural Disaster Monitoring Centre (@KarnatakaSNDMC) June 11, 2025 ಜೂ. 12ರಂದು ಎಲ್ಲೆಲ್ಲಿ ರೆಡ್, ಯೆಲ್ಲೋ, ಆರೇಂಜ್ ಅಲರ್ಟ್ ಜೂನ್ 12ರಂದು ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ಕೊಡಗು ಚಿಕ್ಕಮಗಳೂರು ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನುಳಿದಂತೆ ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ,...
ಜೂನ್ 11:ಮಂಗಳೂರು ಉಳ್ಳಾಲ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಮೆಸ್ಕಾಂನ ಪ್ರಕಟಣೆ ಪ್ರಕಾರ, ಜೂನ್ 11ರಂದು ವ್ಯವಸ್ಥೆ ಸುಧಾರಣೆ ಹಾಗೂ ತುರ್ತು ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ವಿವಿಧ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ವಿದ್ಯುತ್ ವ್ಯತ್ಯಯ ಸಂಭವಿಸುವ ಪ್ರದೇಶಗಳು: ಕೊಣಾಜೆ, ಆಸೈಗೋಳಿ, ತಿಪ್ಪೆಪದವು, ಪನೀರ್, ನಡಾರ್, ಸಾಯಿ ನಗರ, ಮಡ್ಯಾರ್, ದೇವರಮನೆ, ಜಲ್ಲಾಲ್ ಬಾಗ್, ದೇರಳಕಟ್ಟೆ, ಕುರಿಯಾ, ರೆಹಮತ್ನಗರ, ಪುಲಿತ್ತಡಿ, ಸಾಂತ್ಯ, ತಚಾಣಿ, ರಬ್ಬರ್ ಫ್ಯಾಕ್ಟರಿ, ಲಕ್ಷ್ಮೀಗುಡ್ಡೆ, ಮುರುಕಟ್ಟಿ ಕುಂಪಲ, ಕನೀರ್ ತೋಟ, ಕೋಡಿಜಾಲ್, ಪರಂಡೆ, ಅಡ್ಡರೆಪಡ್ಡು, ಕಲ್ಲಿಮಾರ್, ಗ್ರೀನ್ ಬಾಗ್, ನಾಟೆಕಲ್, ಸಂಕೇಶ, ಪನೀರ್ ಸೈಟ್, ನಡುಕುಮೇರ್, ಉಕ್ಕುಡ, ಕೈಕಂಬ, ದೇವಿನಗರ, ಕೆ.ಸಿ. ರೋಡ್, ಹೊಸನಗರ, ಉಚ್ಚಿಲ, ಪ್ರವಾಸಿ ಬಂಗ್ಲೆ, ಕೆ.ಸಿ. ನಗರ, ಪೂಮಣ್ಣು, ಪಿಲಿಕೂರು, ಬೈವೆರ್ಪಾಲ್, ಲಕ್ಕರ್, ಮಧುಪಾಲ್, ಅಜ್ಜಿನಡ್ಕ, ಮುಲ್ಲುಗುಡ್ಡೆ, ತಲಪಾಡಿ, ಟೋಲ್ ಗೇಟ್, ಮೇಲಿನ ತಲಪಾಡಿ, ನಾರ್ಲ, ವಿವೇಕನಂದ ನಗರ, ನೆತ್ತಿಲಪದವು, ಬೀರಿ, ಮಾಡೂರು, ಕೊಂಡಾಣ ಬಳಿ, ಸಾಯಿ ಧಾಮ, ಪನೀರ್ ಓವರ್ ಬ್ರಿಡ್ಜ್, ಮೇಲಂಗಡಿ, ದರ್ಗಾ, ಬಸ್ತಿಪಡ್ಡು, ಉಳಿಯ,...
ಸುಹಾಸ್ ಶೆಟ್ಟಿ ಹತ್ಯೆಯಂತೆಯೇ ಅಶ್ರಫ್, ರೆಹ್ಮಾನ್, ಫಾಜಿಲ್, ಮುಲ್ಕಿ ಅಟೋ ಡ್ರೈವರ್ ಶರೀಫ್, ಮಸೂದ್, ಹತ್ಯೆಯನ್ನೂ ಎನ್ಐಎಗೆ ವಹಿಸಿ” ಉಸ್ಮಾನ್ ಕಲ್ಲಾಪು ಆಗ್ರಹ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೂವರೆಗೆ ನಡೆದಿರುವ ಪ್ರಕರಣಗಳು ಇಡೀ ಕರಾವಳಿಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಕೊಲೆಗಳು ಒಂದಕ್ಕೊಂದು ಪ್ರತೀಕಾರದ ಕೊಲೆಯಾಗಿರುವ ಸಾಧ್ಯತೆಯಿದ್ದು, ಈ ಎಲ್ಲಾ ಪ್ರಕರಣಗಳನ್ನು ಕೂಡ ಎನ್ ಐಎ ತನಿಖೆಗೆ ವಹಿಸಿದರೆ ದುಷ್ಜೃತ್ಯದ ಹಿಂದಿನ ಸತ್ಯ ಬಯಲಿಗೆ ಬರಲಿದೆ” ಕೇಂದ್ರ ಸರಕಾರ ಸುಹಾಸ್ ಶೆಟ್ಟಿಯ ಹತ್ಯೆಯನ್ನು ಎನ್ಐಎಗೆ ವಹಿಸಿದ ಹಾಗೆ ರಾಜ್ಯ ಸರಕಾರವೂ ಕಳೆದ ೨೦ ವರ್ಷದಿಂದ ಕರಾವಳಿಯಲ್ಲಿ ಕೋಮು ಜ್ವಾಲೆಯಿಂದ ನಡೆದ ಎಲ್ಲಾ ಪ್ರಕರಣಗಳನ್ನು ಎನ್.ಐ.ಎ ತನಿಖೆಗೆ ವಹಿಸಲಿ.. ಫಾಝಿಲ್ ಹತ್ಯೆಯಾದಾಗ, ಮಸೂದ್ ಹತ್ಯೆಯಾದಾಗ ಸರಕಾರದಿಂದ ಪರಿಹಾರ ನೀಡಿದ್ದೀರಾ? ಯಾಕೆ ಸತ್ತವನು ಮುಸ್ಲಿಮನೆಂದು ನೀಡಿಲ್ಲವಾ? ನಾಗರಿಕ ಸಮಾಜದಲ್ಲಿ ನಾವೆಲ್ಲರೂ ಒಂದಾಗಿ ಬದುಕುವ, ನಮಗೆ ಈ ಕೊಲೆ, ದರೋಡೆ, ಯಾವುದೂ ಬೇಡ. ನಮಗೆ ಶಾಂತಿಯ ಸಮಾಜ, ಶಾಂತಿಯ ಜಿಲ್ಲೆ ನಮಗೆ ಬೇಕಾಗಿದೆ. ತಪ್ಪು ಯಾರೂ ಮಾಡಿದರೂ ಅದು ತಪ್ಪು ಎಂದು ಹೇಳುವ ವ್ಯಕ್ತಿತ್ವ ನಮ್ಮದಾಗಬೇಕು, ಮುಸ್ಲಿಮರು, ಹಿಂದುಗಳು, ಕ್ರೈಸ್ತರು ಅಣ್ಣ ತಮ್ಮಂದಿರ ಹಾಗೆ ಬದುಕುವ ಕಾಲವಿತ್ತು, ಅದನ್ನು ಮರುಕಳಿಸುವ ಹಾಗೆ...
H. ಫಾತಿಮಾ ಫೌಂಡೇಷನ್ : SSLC ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಸನ್ಮಾನ-ಸತ್ಕಾರ- ಪುರಸ್ಕಾರ
H.ಫಾತಿಮಾ ಫೌಂಡೇಷನ್ ಮೇಲ0ಗಡಿ,ಉಳ್ಳಾಲ ಇದರ ವತಿಯಿಂದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ 2024-25 ನೇ ಸಾಲಿನ SSLC ಪರೀಕ್ಷೆ ಪಲಿತಾಂಶದಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನೀ ದಕ್ಷಿಣ ಕನ್ನಡ ಜಿಲ್ಲೆ ಇಲ್ಲಿನ ಮೂರು ಶಾಲೆಗಳಲ್ಲಿ ಅತ್ಯಧಿಕ ಅಂಕ ಪಡೆದಿರುವ ಮೂರು ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು 1.ಅನಿತಾ ಡಿ.ಬಡಿಗೇರ. ಅಂಕ 566. ( ಭಾರತ್ ಪ್ರೌಢ ಸರ್ಕಾರಿ ಅನುದಾನಿತ ಕನ್ನಡ ಮಾಧ್ಯಮ ಶಾಲೆ ಉಳ್ಳಾಲ. 2.ಆಯಿಶಾ ಮಶ್ಪಿಕ ಅಂಕ 600 (ಹಝ್ರತ್ ಸೈಯದ್ ಮದನಿ ಆಂಗ್ಲ ಮಾಧ್ಯಮ ಶಾಲೆ, ಉಳ್ಳಾಲ.) 3. ಗ್ಲೆನಿಶಾ ಬ್ರಿಟ್ನಿ ಡಿ”ಸೋಜ. ಅಂಕ 606 (ಸೈಂಟ್ ಸೆಬೆಸ್ಟಿನ್ ಆಂಗ್ಲ ಮಾಧ್ಯಮ ಶಾಲೆ. ಪೆರ್ಮನ್ನೂರು,ತೊಕ್ಕೊಟ್ಟು) ಈ ಮೂರು ವಿದ್ಯಾರ್ಥಿನಿಯರು ತಮ್ಮ ಅಸಾಧಾರಣ ಕಲಿಕಾ ಪ್ರತಿಭೆಯಿಂದ SSLC ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದು ತಮ್ಮ ಶಾಲೆ, ಕುಟುಂಬ,ಸಮುದಾಯಕ್ಕೆ ಹೆಮ್ಮೆ ತಂದು ಕೊಟ್ಟಿದ್ದಾರೆ. H. ಫಾತಿಮಾ ಫೌಂಡೇಷನ್ ಈ ವಿದ್ಯಾರ್ಥಿನಿಯರನ್ನು ಮನೆಗೆ ಆಹ್ವಾನಿಸಿ ಅವರಿಗೆ ಸನ್ಮಾನ,ಸತ್ಕಾರ ಕೂಟ ಏರ್ಪಡಿಸಿ ಪುರಸ್ಕಾರ ನೀಡಿ ಮುಂದಿನ...