Image

ಕ್ಯಾಂಪಸ್‌ನಲ್ಲಿ ಡ್ರಗ್‌ ಬೇಟೆಯಾಡಿದ ಪೊಲೀಸರು: ರ‍್ಯಾಡಂಮ್‌ ಟೆಸ್ಟ್‌, 77 ಕಾಲೇಜುಗಳ 20ವಿದ್ಯಾರ್ಥಿಗಳಲ್ಲಿ ಪಾಸಿಟಿವ್‌

ಮಂಗಳೂರು: ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಶಾಲಾ- ಕಾಲೇಜು ಕ್ಯಾಂಪಸ್‌ಗಳಲ್ಲಿ ಮಾದಕ ಜಾಲದ ವಿರುದ್ಧ ಜಾಗೃತಿ ಹಾಗೂ ಡ್ರಗ್ಸ್‌ ತಪಾಸಣೆ ಅಭಿಯಾನದ ಪ್ರಥಮ ಹಂತ ಮುಗಿದಿದೆ. ಈಗಾಗಲೇ 77 ಶಾಲಾ- ಕಾಲೇಜುಗಳಲ್ಲಿ ರ‍್ಯಾಡಂಮ್‌ ತಪಾಸಣೆ ನಡೆಸಲಾಗಿದ್ದು, 20 ವಿದ್ಯಾರ್ಥಿಗಳಲ್ಲಿ ಪಾಸಿಟಿವ್‌ ಬಂದಿದೆ

ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಆಗಿ ಸುಧೀರ್‌ ಕುಮಾರ್‌ ರೆಡ್ಡಿ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಮಾದಕ ಮಾರಾಟ ಮತ್ತು ಸೇವನೆ ವಿರುದ್ಧ ಸಮರ ಸಾರಿದ್ದಾರೆ. ಮುಖ್ಯವಾಗಿ ಕಾಲೇಜು ಕ್ಯಾಂಪಸ್‌ಗಳಲ್ಲಿ ಮಾದಕ ಸಾಗಾಟ ಮತ್ತು ಸೇವನೆ ಅಧಿಕವಾಗುತ್ತಿರುವ ದೂರಿನ ಹಿನ್ನೆಲೆಯಲ್ಲಿ ಕಮಿಷನರ್‌ ದಿಟ್ಟ ಕ್ರಮಕ್ಕೆ ಮುಂದಾಗಿದ್ದರು. ಇದರ ವಿರುದ್ಧ ಕೆಲವೊಂದು ಕಾಲೇಜುಗಳ ಆಡಳಿತ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದ್ದರೂ ತನ್ನ ನಿಲುವಿನಿಂದ ಹಿಂಜರಿಯದೆ ರ‍್ಯಾಡಂಮ್ ಟೆಸ್ಟ್‌ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮೊದಲ ಹಂತದ ಕಾರ್ಯಚರಣೆ ಪೂರ್ಣ

ಜೂ.1ರಿಂದ ನ.30ರವರೆಗೆ ಕಾಲೇಜು ಕ್ಯಾಂಪಸ್‌ಗಳಲ್ಲಿ ಮೊದಲ ಹಂತದ ಮಾದಕ ಸೇವನೆ ರ‍್ಯಾಡಂಮ್ ಟೆಸ್ಟ್‌ ಮುಗಿದಿದೆ. ಮಂಗಳೂರು ದಕ್ಷಿಣ ಉಪವಿಭಾಗದ (ಉಳ್ಳಾಲ, ಕೋಣಾಜೆ, ಮಂಗಳೂರು ಗ್ರಾಮಾಂತರ ಠಾಣೆ) ಒಟ್ಟು 29 ಕಾಲೇಜುಗಳಲ್ಲಿ 1601 ವಿದ್ಯಾರ್ಥಿಗಳ ತಪಾಸಣೆ ನಡೆಸಲಾಗಿದ್ದು, 8 ಮಂದಿ ಪಾಸಿಟಿವ್‌, 1593 ನೆಗೆಟಿವ್‌ ಬಂದಿದೆ.

ಮಂಗಳೂರು ಕೇಂದ್ರ ಉಪ ವಿಭಾಗದ (ಬಂದರು, ಬರ್ಕೆ, ಪಾಂಡೇಶ್ವರ, ಕದ್ರಿ ಉರ್ವ ಠಾಣೆ) 30 ಕಾಲೇಜುಗಳಲ್ಲಿ 1448 ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಲಾಗಿದ್ದು, 6 ಮಂದಿ ಪಾಸಿಟಿವ್‌, 1442 ಮಂದಿ ನೆಗೆಟಿವ್‌ ಬಂದಿದ್ದಾರೆ. ಮಂಗಳೂರು ಉತ್ತರ ಉಪ ವಿಭಾಗದ (ಪಣಂಬೂರು, ಕಾವೂರು, ಬಜಪೆ, ಸುರತ್ಕಲ್, ಮೂಲ್ಕಿ, ಮೂಡುಬಿದಿರೆ) 11 ಕಾಲೇಜುಗಳಲ್ಲಿ 2020 ವಿದ್ಯಾರ್ಥಿಗಳ ತಪಾಸಣೆ ನಡೆಸಲಾಗಿದ್ದು, ಒಂದೂ ಕೂಡ ಪಾಸಿಟಿವ್‌ ಬಂದಿಲ್ಲ. ಒಟ್ಟು ಮಂಗಳೂರು ‌ ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ 70 ಕಾಲೇಜುಗಳ 5069 ವಿದ್ಯಾರ್ಥಿಗಳ ತಪಾಸಣೆ ನಡೆಸಲಾಗಿದ್ದು, 14 ಮಂದಿಯಲ್ಲಿ ಪಾಸಿಟಿವ್‌ ಬಂದಿದ್ದಾರೆ

ಕೆಲ ಕಾಲೇಜುಗಳು ಹಿಂದೇಟು

ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಕೆಲವೊಂದು ಕಾಲೇಜುಗಳ ಆಡಳಿತ ಮಂಡಳಿ ರ‍್ಯಾಡಂಮ್ ಮಾದಕ ಪರೀಕ್ಷೆಗೆ ಹಿಂದೇಟು ಹಾಕಿ, ಸಹಕಾರ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಕ್ಯಾಂಪಸ್‌ ಸುತ್ತಮುತ್ತ ಸ್ವತಃ ಪೊಲೀಸರೇ ಗಸ್ತು ಮಾಡಿ ವಿದ್ಯಾರ್ಥಿಗಳ ತಪಾಸಣೆ ನಡೆಸಿದ್ದಾರೆ. ಈ ಸಂದರ್ಭ ಕೆಲವೊಂದು ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಪಾಸಿಟಿವ್‌ ಬಂದಿದ್ದು, ಆ ವಿದ್ಯಾರ್ಥಿಗಳ ವರದಿಯನ್ನು ಕಾಲೇಜು ಆಡಳಿತ ಮಂಡಳಿ ಗಮನಕ್ಕೆ ತರಲಾಯಿತು. ಇದರಿಂದ ಎಚ್ಚೆತ್ತುಕೊಂಡ ಕಾಲೇಜು ಆಡಳಿತ ಮಂಡಳಿ ಬಳಿಕ ಕಾಲೇಜು ಕ್ಯಾಂಪಸ್‌ನಲ್ಲಿ ರ‍್ಯಾಡಂಮ್‌ ಮಾದಕ ತಪಾಸಣೆಗೆ ಅನುಮತಿ ನೀಡಿತು.

ಕಾಲೇಜು ಕ್ಯಾಂಪಸ್‌ ಸುತ್ತಮುತ್ತ ಪೊಲೀಸರು ಗಸ್ತು ನಡೆಸಿ ತಪಾಸಣೆ ನಡೆಸಿದ ಸಂದರ್ಭ ಮಂಗಳೂರು ದಕ್ಷಿಣ ಉಪ ವಿಭಾಗದಲ್ಲಿ 3 ಕಾಲೇಜುಗಳ 30 ಮಂದಿ ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಲಾಗಿದ್ದು ಯಾವುದೇ ಪಾಸಿಟಿವ್‌ ಇರಲಿಲ್ಲ. ಮಂಗಳೂರು ಕೇಂದ್ರ ಉಪ ವಿಭಾಗದಲ್ಲಿ 18ಕಾಲೇಜು 88 ಮಂದಿ ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಲಾಗಿದ್ದು 4 ಮಂದಿಗೆ ಪಾಸಿಟಿವ್‌ ಬಂದಿದೆ. ಮಂಗಳೂರು ಉತ್ತರ ಉಪ ವಿಭಾಗದಲ್ಲಿ7 ಕಾಲೇಜುಗಳ 139 ಮಂದಿ ವಿದ್ಯಾರ್ಥಿಗಳ ತಪಾಸಣೆ ನಡೆಸಲಾಗಿದ್ದು, ಇಬ್ಬರಿಗೆ ಪಾಸಿಟಿವ್‌ ಬಂದಿದೆ.

ಪ್ರವೇಶಾತಿ ವೇಳೆ ಪರೀಕ್ಷೆಗೊಳಪಡಿಸಿ: ಕಮಿಷನರ್‌

ಮಂಗಳೂರು ನಗರ ವ್ಯಾಪ್ತಿಯಲ್ಲಿ ಕಾಲೇಜು ಕ್ಯಾಂಪಸ್‌ಗಳಲ್ಲಿ ಈಗಾಗಲೇ ಮಾದಕ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದ್ದು, ಕಾಲೇಜು ಆಡಳಿತ ಮಂಡಳಿಗೆ ಕಾಲೇಜು ಪ್ರವೇಶಾತಿ ವೇಳೆಯೇ ಮಾದಕ ತಪಾಸಣೆ ನಡೆಸಿ ಕಾಲೇಜು ಸೀಟು ನೀಡಿದರೆ ಉತ್ತಮ ಮತ್ತು ಒಳ್ಳೆಯ ಸಂದೇಶ ರವಾನೆಯಾಗುತ್ತದೆ ಎನ್ನುತ್ತಾರೆ ಪೊಲೀಸ್‌ ಕಮಿಷನರ್‌ ಸುಧೀರ್‌ ಕುಮಾರ್‌ ರೆಡ್ಡಿ.

ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯ ಕೆಲವೊಂದು ಕಾಲೇಜುಗಳಲ್ಲಿ ಡ್ರಗ್ಸ್‌ ತಪಾಸಣೆ ನಡೆಸಿಯೇ ಆ ವರದಿ ಬಳಿಕ ಕಾಲೇಜು ಪ್ರವೇಶಾತಿಗೆ ಅನುಮತಿ ನೀಡುತ್ತಿದೆ. ಇದೇ ಮಾದರಿಯನ್ನು ಎಲ್ಲ ಕಾಲೇಜುಗಳು ಅನುಷ್ಠಾನ ಮಾಡಿದರೆ ಕಾಲೇಜು ಕ್ಯಾಂಪಸನ್ನು ಡ್ರಗ್ಸ್‌ ಮುಕ್ತಗೊಳಿಸಲು ಅನುಕೂಲ ಎನ್ನುತ್ತಾರೆ ಕಮಿಷನರ್‌.

ಜನವರಿಯಿಂದ 2ನೇ ಹಂತದ ತಪಾಸಣೆ

ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಜನವರಿಯಿಂದ 2ನೇ ಹಂತದ ತಪಾಸಣೆ ನಡೆಸಲಾಗುವುದು. ಮುಂದಿನ ಹಂತದಲ್ಲಿ ಈಗಾಗಲೇ ಪಾಸಿಟಿವ್‌ ಬಂದ ವಿದ್ಯಾರ್ಥಿಗಳನ್ನು ಮಾತ್ರ 2ನೇ ಬಾರಿ ತಪಾಸಣೆ, ಉಳಿದಂತೆ ಕ್ಯಾಂಪಸ್‌ನ ಹೊಸ ವಿದ್ಯಾರ್ಥಿಗಳನ್ನೇ ತಪಾಸಣೆಗೊಳಪಡಿಸಲಾಗುವುದು.

– ಸುಧೀರ್‌ ಕುಮಾರ್‌ ರೆಡ್ಡಿ , ಪೊಲೀಸ್‌ ಕಮಿಷನರ್‌

Releated Posts

ಸಹೃದಯಿ ಸಮಾಜಸೇವಕ ಬಿ.ಎ. ಮೊಯ್ದಿನ್ ಬಾವಾ ವಿಧಾನಸಭೆ ಪ್ರವೇಶಿಸಬೇಕೆಂಬ ಜನಮನದ ಆಶಯ

ಬಿ.ಎ.ಮೊಯ್ದಿನ್ ಬಾವಾ ಎಂಬ ಸಹೃದಯಿ ನಾಯಕ ಈಗ ಇಡೀ ರಾಜ್ಯಾದ್ಯಂತ ತಮ್ಮದೇ ಆದ ಅಭಿಮಾನಿ ವರ್ಗವನ್ನು ಹೊಂದಿದ್ದಾರೆ. ಇದಕ್ಕೆ ಕಾರಣ ಅವರ ಸಹೃದಯಿ ಮನಸ್ಸು…

ByByshanmedianewsDec 23, 2025

ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ : ಘಟಾನುಘಟಿ ನಾಯಕರುಗಳ ಭವಿಷ್ಯ ಡಿಸೇಂಬರ್ 24 ಕ್ಕೆ ನಿರ್ಧಾರ

ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ : ಘಟಾನುಘಟಿ ನಾಯಕರುಗಳ ಭವಿಷ್ಯ ಡಿಸೇಂಬರ್ 24 ಕ್ಕೆ ನಿರ್ಧಾರ ಇತ್ತೀಚೆಗೆ ಮೇಲ್ದರ್ಜೆ ಗೆರಲ್ಪಟ್ಟ ಬಜ್ಪೆ ಪಟ್ಟಣ ಪಂಚಾಯತ್,…

ByByshanmedianewsDec 22, 2025

ಸಮಾಜಸೇವೆಯ ಸಾರ್ಥಕ ಪ್ರತೀಕ ಡಾ. ಅಲ್ ಹಾಜ್ ಯು.ಟಿ ಇಫ್ತಿಕಾರ್ ಅಲಿ ಫರೀದ್ – ಶಿಕ್ಷಣ, ವೈದ್ಯಕೀಯ ಹಾಗೂ ಮಾನವೀಯ ಸೇವೆಯಲ್ಲಿ ಅಪೂರ್ವ ಕೊಡುಗೆ

ಡಾ! ಅಲ್ ಹಾಜ್ ಯು.ಟಿ ಇಫ್ತಿಕಾರ್ ಅಲಿ ಫರೀದ್. ಈ ಹೆಸರನ್ನು ಕೇಳದವರು ಯಾರೂ ಇಲ್ಲ. ಕರ್ನಾಟಕ ರಾಜ್ಯದ ಅತ್ಯಂತ ಪ್ರಭಾವಿ ಶಾಸಕರಾಗಿದ್ದ ದಿವಂಗತ…

ByByshanmedianewsDec 22, 2025

ಉಮೀದ್ ಪೋರ್ಟಲ್ ಸಮಸ್ಯೆ: ವಕ್ಫ್ ಆಸ್ತಿ ಅಪ್ಲೋಡ್ ಗಡುವು ವಿಸ್ತರಣೆಗಾಗಿ AIMPLB ನಿಯೋಗದಿಂದ ಕೇಂದ್ರ ಸಚಿವರಿಗೆ ಮನವಿ

ಅಖಿಲ ಭಾರತ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‌ನ (AIMPLB) ಉನ್ನತ ಮಟ್ಟದ ನಿಯೋಗವು ಕೇಂದ್ರ ಅಲ್ಪಸಂಖ್ಯಾತ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿಯಾಗಿ, ವಕ್ಫ್…

ByByshanmedianewsDec 12, 2025

ಮುಸ್ಲಿಂ ವಿವಾಹ ನೋಂದಾವಣಿಗೆ ವ್ಯವಸ್ಥೆ ಕಲ್ಪಿಸಲು, ಮುಸ್ಲಿಂ ಸೆಂಟ್ರಲ್ ಕಮಿಟಿ ನಿಯೋಗದಿಂದ, ಬೆಳಗಾವಿಯಲ್ಲಿ, ಸ್ಪೀಕರ್ ಹಾಗೂ ವಖ್ಫ್ ಸಚಿವರ ಭೇಟಿ: ಮನವಿ ಸಲ್ಲಿಕೆ

ಮುಸ್ಲಿಂ ವಿವಾಹ ನೋಂದಾವಣಿಗೆ ವ್ಯವಸ್ಥೆ ಕಲ್ಪಿಸಲು, ಮುಸ್ಲಿಂ ಸೆಂಟ್ರಲ್ ಕಮಿಟಿ ನಿಯೋಗದಿಂದ, ಬೆಳಗಾವಿಯಲ್ಲಿ, ಸ್ಪೀಕರ್ ಹಾಗೂ ವಖ್ಫ್ ಸಚಿವರ ಭೇಟಿ: ಮನವಿ ಸಲ್ಲಿಕೆ. ಬೆಳಗಾವಿ:…

ByByshanmedianewsDec 10, 2025

ಇಂದು ಉಳ್ಳಾಲ ಮೇಲಂಗಡಿ ದರ್ಗಾ ವಠಾರದಲ್ಲಿ ತುರ್ತು ಕಾಮಗಾರಿಯಿಂದ ವಿದ್ಯುತ್ ವ್ಯತ್ಯಯ

ಉಳ್ಳಾಲ ಮೇಲಂಗಡಿ ದರ್ಗಾ ವಠಾರದಲ್ಲಿ ಕರೆಂಟ್ ಇಲ್ಲ ಇವತ್ತು

ByByshanmedianewsDec 10, 2025

ಎಂ ಡಿ ಡಾ ಯೂಸುಫ್ ಕುಂಬ್ಳೆ ಸನ್ಮಾನ ಮಂಗಳೂರು

ಮಂಗಳೂರು ತಾಜ್ ವಿವಾoತ ಹಾಲ್ ನಲ್ಲಿ ಮಂಗಳೂರಿನ ಖ್ಯಾತ ಇಂಟರ್ವೆನ್ಶನ್ ಕಾರ್ಡಿಯೋಲಾಜಿಸ್ಟ್, ಇಂಡಿಯಾನ ಹಾಸ್ಪಿಟಲ್ & ಹಾರ್ಟ್ ಇನ್ಸ್ಟಿಟ್ಯೂಟ್ ಎಂ ಡಿ ಡಾ ಯೂಸುಫ್…

ByByshanmedianewsNov 29, 2025

ಇಂದು ಉಳ್ಳಾಲ ಕ್ಷೇತ್ರದ ಹಲವು ಪ್ರದೇಶಗಳಲ್ಲಿ ತುರ್ತು ಕಾಮಗಾರಿಯಿಂದ ವಿದ್ಯುತ್ ವ್ಯತ್ಯಯ

ಉಳ್ಳಾಲ ಪ್ರದೇಶದಲ್ಲಿ ಇವತ್ತು ಕರೆಂಟ್ ಇಲ್ಲ ತಲಪಾಡಿ ದೇರ್ಲಕಟ್ಟೆ ಕೋಟೆಪುರ ಮೇಲಂಗಡಿ ಕಲಾಪು, ಎಲ್ಲಾ ಪ್ರದೇಶ ಇವತ್ತು ಕರೆಂಟ್ ಆಡಚಣೆ ತುರ್ತು ಕೆಲಸದ ನಿಮಿತ್ತ…

ByByshanmedianewsNov 26, 2025

Scroll to Top