Image

ಸಮಾಜಸೇವೆಯ ಸಾರ್ಥಕ ಪ್ರತೀಕ ಡಾ. ಅಲ್ ಹಾಜ್ ಯು.ಟಿ ಇಫ್ತಿಕಾರ್ ಅಲಿ ಫರೀದ್ – ಶಿಕ್ಷಣ, ವೈದ್ಯಕೀಯ ಹಾಗೂ ಮಾನವೀಯ ಸೇವೆಯಲ್ಲಿ ಅಪೂರ್ವ ಕೊಡುಗೆ

ಡಾ! ಅಲ್ ಹಾಜ್ ಯು.ಟಿ ಇಫ್ತಿಕಾರ್ ಅಲಿ ಫರೀದ್.

ಈ ಹೆಸರನ್ನು ಕೇಳದವರು ಯಾರೂ ಇಲ್ಲ. ಕರ್ನಾಟಕ ರಾಜ್ಯದ ಅತ್ಯಂತ ಪ್ರಭಾವಿ ಶಾಸಕರಾಗಿದ್ದ ದಿವಂಗತ ಯು.ಟಿ ಫರೀದ್ ರವರ ಸುಪುತ್ರ ಹಾಗೂ ಪ್ರಸಕ್ತ ಕರ್ನಾಟಕ ವಿಧಾನಸಭೆಯ ಸಭಾಪತಿಗಳಾದ ಸನ್ಮಾನ್ಯ ಯು. ಟಿ ಕಾದರ್ ಅವರ ಸಹೋದರರೂ ಕರ್ನಾಟಕ ಸರಕಾರದ ಅಲೈಡ್ ಮತ್ತು ಹೆಲ್ತ್ ಕೌನ್ಸಿಲ್ ಇದರ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಇವರು ಸಮಾಜಕ್ಕೆ ಅರ್ಪಿಸಿದ ಸೇವೆಗಳ ಪಟ್ಟಿಗಳು ಅಪಾರ. *ವಿದ್ಯಾಕ್ಷೇತ್ರ*

ಯು. ಟಿ ಇಫ್ತಿಕಾರ್ ಅವರ ವಿದ್ಯಾಕ್ಷೇತ್ರದ ಬಗ್ಗೆ ಕಣ್ಣಾಡಿಸಿದರೆ ಸಮಾಜಕ್ಕೆ ಅದೆಷ್ಟೋ ವಿದ್ಯಾವಂತರನ್ನು ತಯಾರಿಗೊಳಿಸಿ ಅರ್ಪಿಸಿದ ಕೀರ್ತಿ ಇವರಿಗೆ ಸಲ್ಲಬೇಕು, ಬಡ ಕುಟುಂಬದಲ್ಲಿ ಜನಿಸಿದ ವಿದ್ಯಾರ್ಥಿಗಳು ಆರ್ಥಿಕ ಅಡಚಣೆಯಿಂದ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಲು ಸಾಧ್ಯವಿಲ್ಲವೆಂಬ ನಿರಾಸೆಯಿಂದ ಇದ್ದವರಿಗೆ ಅವರ ಉನ್ನತ ಶಿಕ್ಷಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಇಂದು ಅದೆಷ್ಟೋ ಬಡ ಕುಟುಂಬದಲ್ಲಿ ಡಾಕ್ಟರ್, ಇಂಜಿನಿಯರ್, ಫಾರ್ಮಾಸಿಸ್ಟ್, ನರ್ಸ್, ಡೆಂಟಿಸ್ಟ್, ಫಿಸಿಯೋತೆರಪಿಸ್ಟ್, ಗಳು ತಲೆಯೆತ್ತಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವನಂತೆ ಮಾಡಿದ್ದಾರೆ, ಅಲ್ಲದೇ ತಂದೆ ತಾಯಿಗಲಿಲ್ಲದ ಯತೀಮ್ ಮಕ್ಕಳಿಗೆ ಯಾವುದೇ ಶುಲ್ಕವಿಲ್ಲದೆ ಸಂಪೂರ್ಣ ಉಚಿತವಾಗಿ ಉನ್ನತ ಶಿಕ್ಷಣವನ್ನು ಕೊಡಿಸಿದ ಅದೆಷ್ಟೋ ಉಧಾಹರಣೆ ನಮ್ಮ ಕಣ್ಣಮುಂದೆ ಇದೆ. *ವೈದ್ಯಕೀಯ*

ಇಂದು ಬಡ ಹಾಗೂ ಮಧ್ಯಮ ಕುಟುಂಬವು ಏನಾದರೂ ಕಾಯಿಲೆ ಬಂದರೆ ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ಭರಿಸಲು ಸಾಧ್ಯವಾಗದೇ ತಮ್ಮಲ್ಲಿರುವ ಒಡವೆಗಳನ್ನು ಮಾರಿ ಅದು ಸಾಲದೇ ಹೋದರೆ ತಮ್ಮ ಮನೆಯನ್ನು ಮಾರಿ ಬೀದಿಗೆ ಬಂದು ನಿಲ್ಲುವ ಪರಿಸ್ಥಿತಿ ಇದೆ, ಆದರೆ ಸನ್ಮಾನ್ಯ ಯು. ಟಿ ಇಫ್ತಿಕಾರ್ ಅವರು ಅದೆಷ್ಟೋ ಕುಟುಂಬಗಳ ಆಸ್ಪತ್ರೆಯ ಖರ್ಚುಗಳನ್ನು ಆಸ್ಪತ್ರೆಯ ಆಡಳಿತ ಮಂಡಳಿಯೊಂದಿಗೆ ಮಾತಾಡಿ ಬಡ ಕುಟುಂಬಗಳಿಗೆ ಸಹಾಯವನ್ನು ಮಾಡಿದ್ದಾರೆ, ಕೆಲವೊಮ್ಮೆ ತಮ್ಮದೇ ಆದ ಯು.ಟಿ ಫರೀದ್ ಫೌಂಡೇಶನ್ ಮುಖಾಂತರ ಭರಿಸಿ ರೋಗಿಗಳ ಪಾಲಿಗೆ ಹೊಸ ಭರವಸೆಯನ್ನು ಮೂಡಿಸಿದ್ದಾರೆ. *ವಿಕಲಾಂಗ ಮತ್ತು ಬುದ್ಧಿಮಾಂಧ್ಯರ ಸೇವೆ*

ಕೆಲವು ಬಡ ಕುಟುಂಬದಲ್ಲಿ ಜನಿಸಿದ ವಿಕಲಾಂಗ ಮತ್ತು ಬುದ್ಧಿ ಮಾಂದ್ಯ ಮಕ್ಕಳಿಗೆ ತಾವೇ ಆಸರೆಯಾಗಿ ಅವರ ಸೇವೆಗಳನ್ನು ಮಾಡುತ್ತಿರುವುದು ಯು.ಟಿ ಇಫ್ತಿಕಾರ್ ಅವರ ಸೇವಾ ಮನೋಭಾವಣೆಯ ವೈಸಿಸ್ಟ್ರ್ಯವಾಗಿದೆ.

ಯು. ಟಿ ಇಫ್ತಿಕಾರ್ ಅವರ ಸೇವೆಗಳ ಪಟ್ಟಿ ಮಾಡುತ್ತಾ ಹೋದರೆ ಮುಗಿಯದ ಕಥೆಯಾಗಿದೆ, ಸರಕಾರ ಯಾವುದೇ ಇರಲಿ ಹಳ್ಳಿಯಿಂದ ದಿಲ್ಲಿಯವರೆಗೂ ಎಲ್ಲಾ ಪಕ್ಷಗಳ ನಾಯಕರುಗಳ ನಿಕಟ ಒಡನಾಟದಿಂದ ಸಾರ್ವಜನಿಕರ ಅಹವಾಳಿಗೆ ಸ್ಪಂದನೆಯನ್ನು ನೀಡುವ ಆ ಉದಾತ್ತ ಮನೋಭಾವನೆಯಿಂದ ಯು.ಟಿ ಇಫ್ತಿಕಾರ್ ಅಲಿ ಎಂಬ ಹೆಸರು ದೇಶ ವಿದೇಶಗಳಲ್ಲಿಯೂ ರಾರಾಜಿಸುವಂತಾಗಿದೆ.

ಸೃಷ್ಟಿಕರ್ತನಾದ ಭಗವಂತನು ಬಡ ಹಾಗೂ ನೊಂದ ಕುಟುಂಬಗಳ ಸೇವೆಯನ್ನು ಇನ್ನಷ್ಟು ಮಾಡಲು ಯು. ಟಿ ಇಫ್ತಿಕಾರ್ ಅವರಿಗೆ ಆರೋಗ್ಯದಿಂದ ಕೂಡಿದ ದೀರ್ಘ ಆಯುಷ್ಯವನ್ನು ನೀಡಿ ಕರುಣಿಸಲಿ.

ALI AKBAR (ali monaka ullal)

Releated Posts

ಸಹೃದಯಿ ಸಮಾಜಸೇವಕ ಬಿ.ಎ. ಮೊಯ್ದಿನ್ ಬಾವಾ ವಿಧಾನಸಭೆ ಪ್ರವೇಶಿಸಬೇಕೆಂಬ ಜನಮನದ ಆಶಯ

ಬಿ.ಎ.ಮೊಯ್ದಿನ್ ಬಾವಾ ಎಂಬ ಸಹೃದಯಿ ನಾಯಕ ಈಗ ಇಡೀ ರಾಜ್ಯಾದ್ಯಂತ ತಮ್ಮದೇ ಆದ ಅಭಿಮಾನಿ ವರ್ಗವನ್ನು ಹೊಂದಿದ್ದಾರೆ. ಇದಕ್ಕೆ ಕಾರಣ ಅವರ ಸಹೃದಯಿ ಮನಸ್ಸು…

ByByshanmedianewsDec 23, 2025

ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ : ಘಟಾನುಘಟಿ ನಾಯಕರುಗಳ ಭವಿಷ್ಯ ಡಿಸೇಂಬರ್ 24 ಕ್ಕೆ ನಿರ್ಧಾರ

ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ : ಘಟಾನುಘಟಿ ನಾಯಕರುಗಳ ಭವಿಷ್ಯ ಡಿಸೇಂಬರ್ 24 ಕ್ಕೆ ನಿರ್ಧಾರ ಇತ್ತೀಚೆಗೆ ಮೇಲ್ದರ್ಜೆ ಗೆರಲ್ಪಟ್ಟ ಬಜ್ಪೆ ಪಟ್ಟಣ ಪಂಚಾಯತ್,…

ByByshanmedianewsDec 22, 2025

ಉಮೀದ್ ಪೋರ್ಟಲ್ ಸಮಸ್ಯೆ: ವಕ್ಫ್ ಆಸ್ತಿ ಅಪ್ಲೋಡ್ ಗಡುವು ವಿಸ್ತರಣೆಗಾಗಿ AIMPLB ನಿಯೋಗದಿಂದ ಕೇಂದ್ರ ಸಚಿವರಿಗೆ ಮನವಿ

ಅಖಿಲ ಭಾರತ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‌ನ (AIMPLB) ಉನ್ನತ ಮಟ್ಟದ ನಿಯೋಗವು ಕೇಂದ್ರ ಅಲ್ಪಸಂಖ್ಯಾತ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿಯಾಗಿ, ವಕ್ಫ್…

ByByshanmedianewsDec 12, 2025

ಕ್ಯಾಂಪಸ್‌ನಲ್ಲಿ ಡ್ರಗ್‌ ಬೇಟೆಯಾಡಿದ ಪೊಲೀಸರು: ರ‍್ಯಾಡಂಮ್‌ ಟೆಸ್ಟ್‌, 77 ಕಾಲೇಜುಗಳ 20ವಿದ್ಯಾರ್ಥಿಗಳಲ್ಲಿ ಪಾಸಿಟಿವ್‌

ಮಂಗಳೂರು: ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಶಾಲಾ- ಕಾಲೇಜು ಕ್ಯಾಂಪಸ್‌ಗಳಲ್ಲಿ ಮಾದಕ ಜಾಲದ ವಿರುದ್ಧ ಜಾಗೃತಿ ಹಾಗೂ ಡ್ರಗ್ಸ್‌ ತಪಾಸಣೆ ಅಭಿಯಾನದ ಪ್ರಥಮ…

ByByshanmedianewsDec 11, 2025

ಮುಸ್ಲಿಂ ವಿವಾಹ ನೋಂದಾವಣಿಗೆ ವ್ಯವಸ್ಥೆ ಕಲ್ಪಿಸಲು, ಮುಸ್ಲಿಂ ಸೆಂಟ್ರಲ್ ಕಮಿಟಿ ನಿಯೋಗದಿಂದ, ಬೆಳಗಾವಿಯಲ್ಲಿ, ಸ್ಪೀಕರ್ ಹಾಗೂ ವಖ್ಫ್ ಸಚಿವರ ಭೇಟಿ: ಮನವಿ ಸಲ್ಲಿಕೆ

ಮುಸ್ಲಿಂ ವಿವಾಹ ನೋಂದಾವಣಿಗೆ ವ್ಯವಸ್ಥೆ ಕಲ್ಪಿಸಲು, ಮುಸ್ಲಿಂ ಸೆಂಟ್ರಲ್ ಕಮಿಟಿ ನಿಯೋಗದಿಂದ, ಬೆಳಗಾವಿಯಲ್ಲಿ, ಸ್ಪೀಕರ್ ಹಾಗೂ ವಖ್ಫ್ ಸಚಿವರ ಭೇಟಿ: ಮನವಿ ಸಲ್ಲಿಕೆ. ಬೆಳಗಾವಿ:…

ByByshanmedianewsDec 10, 2025

ಇಂದು ಉಳ್ಳಾಲ ಮೇಲಂಗಡಿ ದರ್ಗಾ ವಠಾರದಲ್ಲಿ ತುರ್ತು ಕಾಮಗಾರಿಯಿಂದ ವಿದ್ಯುತ್ ವ್ಯತ್ಯಯ

ಉಳ್ಳಾಲ ಮೇಲಂಗಡಿ ದರ್ಗಾ ವಠಾರದಲ್ಲಿ ಕರೆಂಟ್ ಇಲ್ಲ ಇವತ್ತು

ByByshanmedianewsDec 10, 2025

ಎಂ ಡಿ ಡಾ ಯೂಸುಫ್ ಕುಂಬ್ಳೆ ಸನ್ಮಾನ ಮಂಗಳೂರು

ಮಂಗಳೂರು ತಾಜ್ ವಿವಾoತ ಹಾಲ್ ನಲ್ಲಿ ಮಂಗಳೂರಿನ ಖ್ಯಾತ ಇಂಟರ್ವೆನ್ಶನ್ ಕಾರ್ಡಿಯೋಲಾಜಿಸ್ಟ್, ಇಂಡಿಯಾನ ಹಾಸ್ಪಿಟಲ್ & ಹಾರ್ಟ್ ಇನ್ಸ್ಟಿಟ್ಯೂಟ್ ಎಂ ಡಿ ಡಾ ಯೂಸುಫ್…

ByByshanmedianewsNov 29, 2025

ಇಂದು ಉಳ್ಳಾಲ ಕ್ಷೇತ್ರದ ಹಲವು ಪ್ರದೇಶಗಳಲ್ಲಿ ತುರ್ತು ಕಾಮಗಾರಿಯಿಂದ ವಿದ್ಯುತ್ ವ್ಯತ್ಯಯ

ಉಳ್ಳಾಲ ಪ್ರದೇಶದಲ್ಲಿ ಇವತ್ತು ಕರೆಂಟ್ ಇಲ್ಲ ತಲಪಾಡಿ ದೇರ್ಲಕಟ್ಟೆ ಕೋಟೆಪುರ ಮೇಲಂಗಡಿ ಕಲಾಪು, ಎಲ್ಲಾ ಪ್ರದೇಶ ಇವತ್ತು ಕರೆಂಟ್ ಆಡಚಣೆ ತುರ್ತು ಕೆಲಸದ ನಿಮಿತ್ತ…

ByByshanmedianewsNov 26, 2025

Scroll to Top