Image

ವಿಧಾನಸೌಧ ವಿವಾದ: ತಂಙಳ್ ಭೇಟಿ, ಛಾಯಾಗ್ರಹಣ ನಿಯಮ ಉಲ್ಲಂಘನೆಯಲ್ಲ

ವಿಧಾನಸಭೆಯ ಸಭಾಂಗಣದೊಳಗೆ ಮುಸ್ಲಿಂ ವಿದ್ವಾಂಸರೂ, ಸಮಾಜದ ಎಲ್ಲಾ ವರ್ಗಗಳಿಂದ ಗೌರವಿಸಲ್ಪಡುವ ಧರ್ಮಗುರುಗಳೂ ಆದ ತಂಙಳ್ ರವರನ್ನು ವಿಧಾನಸೌಧಕ್ಕೆ ಕರೆದುಕೊಂಡು ಹೋಗಿದ್ದು ವಿವಾದವಾಗಿದೆ. ವಿಧಾನಸೌಧದ ಸಭಾಂಗಣದೊಳಗೆ ನಿಯಮಬದ್ಧವಾಗಿ ಪ್ರಜಾಪ್ರಭುತ್ವದ ಸೌಂದರ್ಯವನ್ನು ಸವಿಯುವುದು ಅಪರಾಧ ಹೇಗಾಗುತ್ತದೆ? ವಿಧಾನಸೌಧ ಎನ್ನುವುದು ಪಾರಂಪರಿಕ ಕಟ್ಟಡ. ಇದು ಜನಸಾಮಾನ್ಯರ ಪ್ರವಾಸಿ ತಾಣವೂ ಹೌದು. ವಿಧಾನಸೌಧ ವೀಕ್ಷಣೆಗೆಂದೇ ಸಾರ್ವಜನಿಕರಿಗೆ ಸರ್ಕಾರ/ಸ್ಪೀಕರ್ ಕಚೇರಿ ಪ್ರತ್ಯೇಕ ವ್ಯವಸ್ಥೆಯನ್ನೇ ಮಾಡಿದೆ.
ಲಗತ್ತಿಸಲಾದ ಚಿತ್ರದಲ್ಲಿರುವ ಅಂಶಗಳು ಇಲ್ಲಿವೆ:
‘ತಂಙಳ್‌ ವಿಧಾನಸಭೆ ಸಭಾಂಗಣ ವೀಕ್ಷಣೆಯನ್ನು ಪ್ರಜಾಪ್ರಭುತ್ವ ವಿರೋಧಿಗಳು ಮಾತ್ರ ವಿರೋಧಿಸುತ್ತಾರೆ’
As Per The Established Procedures, When The Karnataka Legislative Assembly Is Not In Session, The Premises Remain Open For Guided visits, As Permitted By The Speaker Office. Photography During Such Non-Session Periods Falls Well Within Permissible Guidelines And Is Subject To The Same Terms Applied To All Visitors. There’s No Breach Of Protocol
(ಸ್ಥಾಪಿತ ಕಾರ್ಯವಿಧಾನಗಳ ಪ್ರಕಾರ, ಕರ್ನಾಟಕ ವಿಧಾನಸಭೆಯು ಅಧಿವೇಶನದಲ್ಲಿ ಇಲ್ಲದಿದ್ದಾಗ, ಸ್ಪೀಕರ್ ಕಚೇರಿಯ ಅನುಮತಿಯ ಮೇರೆಗೆ ಮಾರ್ಗದರ್ಶಿ ವೀಕ್ಷಣೆಗಾಗಿ ಆವರಣವು ತೆರೆದಿರುತ್ತದೆ. ಅಂತಹ ಅಧಿವೇಶನ ರಹಿತ ಅವಧಿಗಳಲ್ಲಿ ಛಾಯಾಗ್ರಹಣವು ಅನುಮತಿಸಲಾದ ಮಾರ್ಗಸೂಚಿಗಳ ವ್ಯಾಪ್ತಿಯಲ್ಲಿ ಬರುತ್ತದೆ ಮತ್ತು ಎಲ್ಲಾ ಸಂದರ್ಶಕರಿಗೆ ಅನ್ವಯವಾಗುವ ಅದೇ ನಿಯಮಗಳಿಗೆ ಒಳಪಟ್ಟಿರುತ್ತದೆ. ಇಲ್ಲಿ ಯಾವುದೇ ಶಿಷ್ಟಾಚಾರದ ಉಲ್ಲಂಘನೆಯಾಗಿಲ್ಲ)

  • Special events and delegations: A delegation from another state would require coordination with the Karnataka Legislative Assembly Secretariat. For a special request like taking a picture inside the hall, they would need to get permission from the appropriate authorities, such as the Speaker’s office. This is not a right under the rules, but a privilege granted by the authorities on a case-by-case basis.
    (ವಿಶೇಷ ಕಾರ್ಯಕ್ರಮಗಳು ಮತ್ತು ನಿಯೋಗಗಳು: ಬೇರೊಂದು ರಾಜ್ಯದ ನಿಯೋಗಕ್ಕೆ ಕರ್ನಾಟಕ ವಿಧಾನಸಭೆ ಸಚಿವಾಲಯದೊಂದಿಗೆ ಸಮನ್ವಯದ ಅಗತ್ಯವಿರುತ್ತದೆ. ಸಭಾಂಗಣದೊಳಗೆ ಚಿತ್ರ ತೆಗೆದುಕೊಳ್ಳುವಂತಹ ವಿಶೇಷ ವಿನಂತಿಗಾಗಿ, ಅವರು ಸ್ಪೀಕರ್ ಕಚೇರಿಯಂತಹ ಸೂಕ್ತ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಾಗುತ್ತದೆ. ಇದು ನಿಯಮಗಳ ಅಡಿಯಲ್ಲಿ ಸಿಗುವ ಹಕ್ಕಲ್ಲ, ಆದರೆ ಅಧಿಕಾರಿಗಳು ಪ್ರಕರಣದಿಂದ-ಪ್ರಕರಣಕ್ಕೆ ನೀಡುವ ವಿಶೇಷ ಸೌಲಭ್ಯವಾಗಿದೆ.)
    ವಿವರಣೆಯ ಮುಂದುವರಿಕೆ:
    ವಿಧಾನಸೌಧಕ್ಕೆ ಅತಿಥಿಯಾಗಿರುವ ಧರ್ಮಗುರುವೊಬ್ಬರನ್ನು ವಿಧಾನಸೌಧ ಸಭಾಂಗಣದೊಳಗೆ ಕರೆದುಕೊಂಡು ಹೋಗಿ ಸಭಾಂಗಣದ ಬಗ್ಗೆ ಮಾಹಿತಿ ನೀಡಿದ್ದು ಯಾವುದೇ ನಿಯಮಗಳ ಉಲ್ಲಂಘನೆಯಲ್ಲ ಎಂದು ಮೇಲಿನ ವಿವರಣೆಯು ಸ್ಪಷ್ಟಪಡಿಸುತ್ತದೆ. ವಿಧಾನಸಭೆ ಅಧಿವೇಶನ ಘೋಷಣೆಯಾದ ಬಳಿಕ ವಿಧಾನಸೌಧದ ಸಭಾಂಗಣದೊಳಗೆ ಹೋಗಲು ಅದರದ್ದೇ ಆದ ನಿಯಮಗಳಿವೆ. ಅಧಿವೇಶನ ನಡೆಯುತ್ತಿರುವಾಗ ಸಭೆ ಯಾರನ್ನೇ ಆದರೂ ಕರೆಸಿಕೊಂಡರೂ ಅವರು ಸಭಾಂಗಣದೊಳಗೆ ಅನುಮತಿಯೊಂದಿಗೆ ಹೋಗಬಹುದೇ ವಿನಹ ಸ್ಪೀಕರ್ ಆಸನದತ್ತ ಹೋಗುವಂತಿಲ್ಲ. ಈ ಕಟ್ಟುನಿಟ್ಟಿನ ನಿಯಮಾವಳಿಗಳು ಅಧಿವೇಶನ ನಡೆಯದೇ ಇರುವ ದಿನಗಳಲ್ಲಿ ಸರಳವಾಗುತ್ತದೆ.
    ವಿಧಾನಸಭೆ ಅಧಿವೇಶನ ನಡೆಯದ ದಿನಗಳಲ್ಲಿ ಸೂಕ್ತ ಅನುಮತಿಯೊಂದಿಗೆ ಗಣ್ಯ ಅತಿಥಿಗಳು ವಿಧಾನಸಭೆ ಸಭಾಂಗಣ ಪ್ರವೇಶಿಸಲು, ವೀಕ್ಷಿಸಲು ಕರ್ನಾಟಕ ವಿಧಾನಸಭೆ ನಿಯಮಾವಳಿಗಳ ಪ್ರಕಾರ ಅವಕಾಶ ಇದೆ. ವಿದೇಶಿ ಗಣ್ಯರು ಭೇಟಿ ನೀಡಿದಾಗ ಅವರನ್ನು ಸಭಾಂಗಣದೊಳಗೆ ಕರೆದುಕೊಂಡು ಹೋಗಿ ವಿಧಾನಸಭೆ ಸಭಾಂಗಣದ ವೈಶಿಷ್ಟ್ಯವನ್ನು ವಿವರಿಸುವ ಪ್ರಕ್ರಿಯೇ ನಿತ್ಯ ನಿರಂತರವಾಗಿ ನಡೆಯುತ್ತದೆ. ಅದಕ್ಕಾಗಿಯೇ ವಿಧಾನಸೌಧದಲ್ಲಿ ‘ವಿಶೇಷ ಗೈಡ್’ ಕೂಡಾ ನೇಮಿಸಲಾಗಿದೆ. ವರ್ಷವೊಂದಕ್ಕೆ ನೂರಾರು ವಿದೇಶಿ ಗಣ್ಯರು ಸಭಾಂಗಣ ವೀಕ್ಷಿಸುತ್ತಾರೆ. ಹಾಗಿರುವಾಗ ಮುಸ್ಲಿಂ ಧರ್ಮಗುರುವೊಬ್ಬರು ಸಭಾಂಗಣ ವೀಕ್ಷಿಸಿದ್ದು ಹೇಗೆ ತಪ್ಪಾಗುತ್ತದೆ?
    ಕರ್ನಾಟಕ ವಿಧಾನಸಭೆಯ (Karnataka Legislative Assembly) “Rules of Procedure and Conduct of Business” ನಿಯಮಾವಳಿಗೆ ತೊಂದರೆಯಾಗದಂತೆ ವರ್ತಿಸುವುದು ನಮ್ಮೆಲ್ಲರ/ಪ್ರವಾಸಿಗರ ಜವಾಬ್ದಾರಿ.
    ಜನಸಾಮಾನ್ಯರಿಗೂ ನಾಡಿನ ಶಕ್ತಿಸೌಧ ವೀಕ್ಷಣೆ ಅವಕಾಶ ಸಿಗಲೆಂದು ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ವಿಧಾನಸೌಧ ಮಾರ್ಗದರ್ಶಿ ಪ್ರವಾಸ’ ನಮ್ಮ ವಿಧಾನಸೌದದಲ್ಲಿ ಜಾರಿಯಲ್ಲಿದೆ. ಪ್ರವಾಸ ಆರಂಭಗೊಂಡ ದಿನವೇ ಅಂದರೆ ಜೂನ್ 02, 2025 ರಂದೇ ಒಂದೇ ದಿನ 102 ಮಂದಿ ಸಾರ್ವಜನಿಕರು ವಿಧಾನಸಭೆಯ ಸಭಾಂಗಣದೊಳಗೆ ಬಂದು ಸಭಾಂಗಣ ವೀಕ್ಷಣೆ ಮಾಡಿದ್ದಾರೆ. ಸಾರ್ವಜನಿಕರು ವಿಧಾನಸೌಧದ ಆವರಣದಲ್ಲಿರುವ ಮಹನೀಯರ ಪುತ್ಥಳಿಗಳಿಂದ ಹಿಡಿದು ವಿಧಾನಸಭೆ, ವಿಧಾನ ಪರಿಷತ್‌ ಸಭಾಂಗಣದವರೆಗೆ ಎಲ್ಲಾ ಪ್ರಮುಖ ಸ್ಥಳಗಳನ್ನೂ ನೋಡಿ ಪ್ರಜಾಪ್ರಭುತ್ವದ ಬಗೆಗಿನ ಜ್ಞಾನ ಹೆಚ್ಚಿಸಿದ್ದಾರೆ.
    ಈ ದೇಶದ ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಅಭಿಮಾನ, ಹೆಮ್ಮೆ ಇರದ ಮಂದಿ ಮಾತ್ರ ನಾನು ಮುಸ್ಲಿಂ ಧರ್ಮಗುರು ತಂಙಳ್ ರನ್ನು ವಿಧಾನಸಭೆಯ ಸಭಾಂಗಣಕ್ಕೆ ಕರೆದೊಯ್ದು ಪ್ರಜಾಪ್ರಭುತ್ವದ ಸೌಂದರ್ಯ ವಿವರಿಸಿದ್ದನ್ನು ವಿರೋಧಿಸುತ್ತಾರೆ.

Releated Posts

ಸಹೃದಯಿ ಸಮಾಜಸೇವಕ ಬಿ.ಎ. ಮೊಯ್ದಿನ್ ಬಾವಾ ವಿಧಾನಸಭೆ ಪ್ರವೇಶಿಸಬೇಕೆಂಬ ಜನಮನದ ಆಶಯ

ಬಿ.ಎ.ಮೊಯ್ದಿನ್ ಬಾವಾ ಎಂಬ ಸಹೃದಯಿ ನಾಯಕ ಈಗ ಇಡೀ ರಾಜ್ಯಾದ್ಯಂತ ತಮ್ಮದೇ ಆದ ಅಭಿಮಾನಿ ವರ್ಗವನ್ನು ಹೊಂದಿದ್ದಾರೆ. ಇದಕ್ಕೆ ಕಾರಣ ಅವರ ಸಹೃದಯಿ ಮನಸ್ಸು…

ByByshanmedianewsDec 23, 2025

ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ : ಘಟಾನುಘಟಿ ನಾಯಕರುಗಳ ಭವಿಷ್ಯ ಡಿಸೇಂಬರ್ 24 ಕ್ಕೆ ನಿರ್ಧಾರ

ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ : ಘಟಾನುಘಟಿ ನಾಯಕರುಗಳ ಭವಿಷ್ಯ ಡಿಸೇಂಬರ್ 24 ಕ್ಕೆ ನಿರ್ಧಾರ ಇತ್ತೀಚೆಗೆ ಮೇಲ್ದರ್ಜೆ ಗೆರಲ್ಪಟ್ಟ ಬಜ್ಪೆ ಪಟ್ಟಣ ಪಂಚಾಯತ್,…

ByByshanmedianewsDec 22, 2025

ಸಮಾಜಸೇವೆಯ ಸಾರ್ಥಕ ಪ್ರತೀಕ ಡಾ. ಅಲ್ ಹಾಜ್ ಯು.ಟಿ ಇಫ್ತಿಕಾರ್ ಅಲಿ ಫರೀದ್ – ಶಿಕ್ಷಣ, ವೈದ್ಯಕೀಯ ಹಾಗೂ ಮಾನವೀಯ ಸೇವೆಯಲ್ಲಿ ಅಪೂರ್ವ ಕೊಡುಗೆ

ಡಾ! ಅಲ್ ಹಾಜ್ ಯು.ಟಿ ಇಫ್ತಿಕಾರ್ ಅಲಿ ಫರೀದ್. ಈ ಹೆಸರನ್ನು ಕೇಳದವರು ಯಾರೂ ಇಲ್ಲ. ಕರ್ನಾಟಕ ರಾಜ್ಯದ ಅತ್ಯಂತ ಪ್ರಭಾವಿ ಶಾಸಕರಾಗಿದ್ದ ದಿವಂಗತ…

ByByshanmedianewsDec 22, 2025

ಉಮೀದ್ ಪೋರ್ಟಲ್ ಸಮಸ್ಯೆ: ವಕ್ಫ್ ಆಸ್ತಿ ಅಪ್ಲೋಡ್ ಗಡುವು ವಿಸ್ತರಣೆಗಾಗಿ AIMPLB ನಿಯೋಗದಿಂದ ಕೇಂದ್ರ ಸಚಿವರಿಗೆ ಮನವಿ

ಅಖಿಲ ಭಾರತ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‌ನ (AIMPLB) ಉನ್ನತ ಮಟ್ಟದ ನಿಯೋಗವು ಕೇಂದ್ರ ಅಲ್ಪಸಂಖ್ಯಾತ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿಯಾಗಿ, ವಕ್ಫ್…

ByByshanmedianewsDec 12, 2025

ಕ್ಯಾಂಪಸ್‌ನಲ್ಲಿ ಡ್ರಗ್‌ ಬೇಟೆಯಾಡಿದ ಪೊಲೀಸರು: ರ‍್ಯಾಡಂಮ್‌ ಟೆಸ್ಟ್‌, 77 ಕಾಲೇಜುಗಳ 20ವಿದ್ಯಾರ್ಥಿಗಳಲ್ಲಿ ಪಾಸಿಟಿವ್‌

ಮಂಗಳೂರು: ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಶಾಲಾ- ಕಾಲೇಜು ಕ್ಯಾಂಪಸ್‌ಗಳಲ್ಲಿ ಮಾದಕ ಜಾಲದ ವಿರುದ್ಧ ಜಾಗೃತಿ ಹಾಗೂ ಡ್ರಗ್ಸ್‌ ತಪಾಸಣೆ ಅಭಿಯಾನದ ಪ್ರಥಮ…

ByByshanmedianewsDec 11, 2025

ಮುಸ್ಲಿಂ ವಿವಾಹ ನೋಂದಾವಣಿಗೆ ವ್ಯವಸ್ಥೆ ಕಲ್ಪಿಸಲು, ಮುಸ್ಲಿಂ ಸೆಂಟ್ರಲ್ ಕಮಿಟಿ ನಿಯೋಗದಿಂದ, ಬೆಳಗಾವಿಯಲ್ಲಿ, ಸ್ಪೀಕರ್ ಹಾಗೂ ವಖ್ಫ್ ಸಚಿವರ ಭೇಟಿ: ಮನವಿ ಸಲ್ಲಿಕೆ

ಮುಸ್ಲಿಂ ವಿವಾಹ ನೋಂದಾವಣಿಗೆ ವ್ಯವಸ್ಥೆ ಕಲ್ಪಿಸಲು, ಮುಸ್ಲಿಂ ಸೆಂಟ್ರಲ್ ಕಮಿಟಿ ನಿಯೋಗದಿಂದ, ಬೆಳಗಾವಿಯಲ್ಲಿ, ಸ್ಪೀಕರ್ ಹಾಗೂ ವಖ್ಫ್ ಸಚಿವರ ಭೇಟಿ: ಮನವಿ ಸಲ್ಲಿಕೆ. ಬೆಳಗಾವಿ:…

ByByshanmedianewsDec 10, 2025

ಇಂದು ಉಳ್ಳಾಲ ಮೇಲಂಗಡಿ ದರ್ಗಾ ವಠಾರದಲ್ಲಿ ತುರ್ತು ಕಾಮಗಾರಿಯಿಂದ ವಿದ್ಯುತ್ ವ್ಯತ್ಯಯ

ಉಳ್ಳಾಲ ಮೇಲಂಗಡಿ ದರ್ಗಾ ವಠಾರದಲ್ಲಿ ಕರೆಂಟ್ ಇಲ್ಲ ಇವತ್ತು

ByByshanmedianewsDec 10, 2025

ಎಂ ಡಿ ಡಾ ಯೂಸುಫ್ ಕುಂಬ್ಳೆ ಸನ್ಮಾನ ಮಂಗಳೂರು

ಮಂಗಳೂರು ತಾಜ್ ವಿವಾoತ ಹಾಲ್ ನಲ್ಲಿ ಮಂಗಳೂರಿನ ಖ್ಯಾತ ಇಂಟರ್ವೆನ್ಶನ್ ಕಾರ್ಡಿಯೋಲಾಜಿಸ್ಟ್, ಇಂಡಿಯಾನ ಹಾಸ್ಪಿಟಲ್ & ಹಾರ್ಟ್ ಇನ್ಸ್ಟಿಟ್ಯೂಟ್ ಎಂ ಡಿ ಡಾ ಯೂಸುಫ್…

ByByshanmedianewsNov 29, 2025

Scroll to Top