Image

2025-26 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಖ್ಯಾತ ಸಮಾಜ ಸೇವಕ ಮೊಹಮ್ಮದ್ ಮುಕ್ಕಚೇರಿ ಆಯ್ಕೆ.


ಜನಪ್ರತಿನಿಧಿ ಎಂಬ ಜವಾಬ್ದಾರಿ ಜನಸೇವೆಯೆ ಹೊರತು ದುಡ್ಡು ಮಾಡುವ ಹುದ್ದೆ ಅಲ್ಲ ಎಂದು ತೋರಿಸಿ ಕೊಟ್ಟು ಮಾದರಿಯಾದ ಉಳ್ಳಾಲ ನಗರ ಸಭೆ ಮಾಜಿ ಅಧ್ಯಕ್ಷರೂ, ಹಾಲಿ ಸದಸ್ಯ ಮಹಮ್ಮದ್ ಮುಕ್ಕಚೇರಿ ಇವರ ಸಮಾಜ ಸೇವೆಯನ್ನು ಗುರುತಿಸಿ 25-26 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿಗಾಗಿ ಇವರನ್ನು ಆಯ್ಕೆ ಮಾಡಲಾಗಿದೆ.

ಉಳ್ಳಾಲದ ಅಂದಿನ ಗ್ರಾಮ ಪಂಚಾಯಿತಿಪಟ್ಟಣ ಪಂಚಾಯಿತಿ, ಪುರಸಭೆ,ಪ್ರಸ್ತುತ ನಗರ ಸಭೆಗೆ ಹೀಗೆ ಸತತವಾಗಿ ಒಟ್ಟು 6 ಬಾರಿ ಆಯ್ಕೆಯಾದ ಏಕೈಕ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮೊಹಮ್ಮದ್ ಮುಕ್ಕಚೇರಿ ಸ್ಥಳಿಯ ಸಂಸ್ಥೆಗೆ ಖಾಲಿ ಕೈಯಲ್ಲಿ ಬಂದು ಇಲ್ಲಿ ಯಾವುದೇ ಅಡ್ಡ ಕಮಾಯಿ ಮಾಡದೇ ಜನ ಸೇವೆ ಮಾಡಿ ಖಾಲಿ ಕೈಯಲ್ಲಿಯೆ ನಿರ್ಗಮಿಸಿ ಕ್ಲೀನ್ ಇಮೇಜ್ ಉಳಿಸಿ ಕೊಂಡು ಜನರ ಒಲವು ಗಳಿಸಿ ಕೊಂಡು ಉಳ್ಳಾಲದಂತಹ ಪ್ರದೇಶದಲ್ಲಿ ಸತತ 6 ಬಾರಿ ಆಯ್ಕೆ ಯಾಗಿದ್ದಾರೆ

ವಿದ್ಯಾವಂತ, ನಿಖರ ಭಾಷಣಕಾರ,ಲೇಖಕ, ಕವನಗಳ ಮೂಲಕ ಸಮಸ್ಯೆಗಳನ್ನು ಚೆನ್ನಾಗಿ ಮನವರಿಕೆ ಮಾಡುವ0ತಹ ನೈಪುಣ್ಯತೆ,ಸಭೆಯಲ್ಲಿ ಅದ್ಬುತವಾಗಿ ವಿಷಯಯ ಮಂಡನೆ ಮಾಡುವ ಪ್ರತಿಭಾವಂತ, ನಿಸ್ವಾರ್ಥ ಸಮಾಜ ಸೇವಕ ಹೀಗೆ ಬಹುಮುಖ ಪ್ರತಿಭೆಯ ಮಹಮ್ಮದ್ ಮುಕ್ಕಚೇರಿ ಅವರಿಗೆ ಉಳ್ಳಾಲ ನಗರ ಸಭೆಯ ಜನಪ್ರತಿನಿಧಿಗಳ ಆಡಳಿತ ಅವಧಿ ಮುಕ್ತಾಯದ ಸಂದರ್ಭದಲ್ಲಿಯೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ವಿಶೇಷ.

ಅರ್ಹತೆ ಅಧಾರದಲ್ಲಿ ಜಿಲ್ಲಾ ರಾಜ್ಯೋತ್ಸವ(ಸಮಾಜ ಸೇವೆ) ಪ್ರಶಸ್ತಿಗೆ ಆಯ್ಕೆಯಾದ ಮಹಮ್ಮದ್ ಮುಕ್ಕಚೇರಿ ಅವರಿಗೆ ಹೃದಯಸ್ಪರ್ಶಿ ಅಭಿನಂದನೆಗಳು

Releated Posts

ಸಹೃದಯಿ ಸಮಾಜಸೇವಕ ಬಿ.ಎ. ಮೊಯ್ದಿನ್ ಬಾವಾ ವಿಧಾನಸಭೆ ಪ್ರವೇಶಿಸಬೇಕೆಂಬ ಜನಮನದ ಆಶಯ

ಬಿ.ಎ.ಮೊಯ್ದಿನ್ ಬಾವಾ ಎಂಬ ಸಹೃದಯಿ ನಾಯಕ ಈಗ ಇಡೀ ರಾಜ್ಯಾದ್ಯಂತ ತಮ್ಮದೇ ಆದ ಅಭಿಮಾನಿ ವರ್ಗವನ್ನು ಹೊಂದಿದ್ದಾರೆ. ಇದಕ್ಕೆ ಕಾರಣ ಅವರ ಸಹೃದಯಿ ಮನಸ್ಸು…

ByByshanmedianewsDec 23, 2025

ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ : ಘಟಾನುಘಟಿ ನಾಯಕರುಗಳ ಭವಿಷ್ಯ ಡಿಸೇಂಬರ್ 24 ಕ್ಕೆ ನಿರ್ಧಾರ

ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ : ಘಟಾನುಘಟಿ ನಾಯಕರುಗಳ ಭವಿಷ್ಯ ಡಿಸೇಂಬರ್ 24 ಕ್ಕೆ ನಿರ್ಧಾರ ಇತ್ತೀಚೆಗೆ ಮೇಲ್ದರ್ಜೆ ಗೆರಲ್ಪಟ್ಟ ಬಜ್ಪೆ ಪಟ್ಟಣ ಪಂಚಾಯತ್,…

ByByshanmedianewsDec 22, 2025

ಸಮಾಜಸೇವೆಯ ಸಾರ್ಥಕ ಪ್ರತೀಕ ಡಾ. ಅಲ್ ಹಾಜ್ ಯು.ಟಿ ಇಫ್ತಿಕಾರ್ ಅಲಿ ಫರೀದ್ – ಶಿಕ್ಷಣ, ವೈದ್ಯಕೀಯ ಹಾಗೂ ಮಾನವೀಯ ಸೇವೆಯಲ್ಲಿ ಅಪೂರ್ವ ಕೊಡುಗೆ

ಡಾ! ಅಲ್ ಹಾಜ್ ಯು.ಟಿ ಇಫ್ತಿಕಾರ್ ಅಲಿ ಫರೀದ್. ಈ ಹೆಸರನ್ನು ಕೇಳದವರು ಯಾರೂ ಇಲ್ಲ. ಕರ್ನಾಟಕ ರಾಜ್ಯದ ಅತ್ಯಂತ ಪ್ರಭಾವಿ ಶಾಸಕರಾಗಿದ್ದ ದಿವಂಗತ…

ByByshanmedianewsDec 22, 2025

ಉಮೀದ್ ಪೋರ್ಟಲ್ ಸಮಸ್ಯೆ: ವಕ್ಫ್ ಆಸ್ತಿ ಅಪ್ಲೋಡ್ ಗಡುವು ವಿಸ್ತರಣೆಗಾಗಿ AIMPLB ನಿಯೋಗದಿಂದ ಕೇಂದ್ರ ಸಚಿವರಿಗೆ ಮನವಿ

ಅಖಿಲ ಭಾರತ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‌ನ (AIMPLB) ಉನ್ನತ ಮಟ್ಟದ ನಿಯೋಗವು ಕೇಂದ್ರ ಅಲ್ಪಸಂಖ್ಯಾತ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿಯಾಗಿ, ವಕ್ಫ್…

ByByshanmedianewsDec 12, 2025

Scroll to Top