Image

ಅಪಘಾತ ತಡೆಗಟ್ಟಲು ರಸ್ತೆಗೆ ಹಂಪ್ಸ್ ಅಳವಡಿಸಲು ಬೋಳಿಯಾರ್ ಗ್ರಾಮಮಚಾಯತ್ ಪಿ.ಡಿ.ಓ ಅಧಿಕಾರಿಗೆ ಮನವಿ

ಬೋಳಿಯಾರ್ ನ10: ಬೋಳಿಯಾರ್ ಗೋಳಿದಡಿ ಕ್ರಾಸ್ ರಾಜ್ಯ ಹೆದ್ದಾರಿಯಲ್ಲಿ ನಿನ್ನೆ ದ್ವಿಚಕ್ರ ವಾಹನ ಸವಾರರು ಪರಸ್ಪರ ಡಿಕ್ಕಿಹೊಡೆದ ಕಾರಣ ಸ್ಥಳಿಯ ನಿವಾಸಿ ಫಾರೂಕ್ ಎಂಬುವವರು ತೀವ್ರ ಗಾಯಾಳಾಗಿ ಖಾಸಗಿ ಅಸ್ಪತ್ರೆ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೋಳಿಯಾರ್ ಗ್ರಾಮ‌ ಪಂಚಾಯತ್ ವ್ಯಾಪ್ತಿಯ ಗೋಳಿದಡಿ ಕ್ರಾಸ್ ನೇತಾಜಿ ಆಟೋ ಪಾರ್ಕ್ ಹತ್ತಿರ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿದ್ದು ಈ ರಸ್ತೆಯಲ್ಲಿ ದಿನಾಲು ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ಈ ರಸ್ತೆಯ ಪಕ್ಕದಲ್ಲಿಯೇ ಬಸ್ಸು ತಂಗುದಾನ ಆಟೋ ಪಾರ್ಕ್ ಹಾಗೂ ಪಾದಚಾರಿಗಳು ನಡೆದಾಡುವ ರಸ್ತೆ ಹಾಗೂ ಶಾಲಾ ವಿದ್ಯಾರ್ಥಿಗಳು ಮದರಸದ ವಿದ್ಯಾರ್ಥಿಗಳು ಮನೆಗೆ ಹೋಗಬೇಕಾದರೆ ಮಜಿ ದೇವಸ್ಥಾನಕ್ಕೆ ಹೋಗಬೇಕಾದರೆ ಈ ರಸ್ತೆ ದಾಟಿಯೇ ಹೋಗಬೇಕು ಈ ಎಲ್ಲಾ ಕಾರಣಗಳಿಂದ ಇಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಅಪಘಾತಗಳು ಸಂಭವಿಸುತ್ತಲೇ ಇದೆ ಈಗಾಗಲೇ ದೊಡ್ಡಮಟ್ಟದ ಅಪಘಾತ ಸಂಭವಿಸಿ ಬಾಲಕೃಷ್ಣ ದೆದ್ದು, ವಿಲಿಯಂ ಡಿಸೋಜ ಮಜಿ ಸೈಟ್ ಹಾಗೂ ರೋಶನ್ ವರ್ಕಾಡಿ ಮೂರು ಅಮೂಲ್ಯ ಜೀವಗಳು ಬಲಿಯಾಗಿ ಕುಟುಂಬ ಅನಾಥವಾಗಿದೆ ಹಾಗೆಯೇ ದ್ವಿಚಕ್ರ ವಾಹನ ಸವಾರರ ಹಾಗೂ ಪಾದಚಾರಿಗಳು ಕಾಲು ಕಳೆದುಕೊಂಡ ಅದೆಷ್ಟೋ ಘಟನೆಗಳು ಕೂಡ ಸಂಭವಿಸಿದೆ
ಆದುದರಿಂದ ಮುಂದಿನ‌ ದಿನಗಳಲ್ಲಿ ಈ ರೀತಿಯ ಘಟನೆಗಳು ಸಂಭವಿಸದಂತೆ ಕೂಡಲೇ ರಸ್ತೆಗೆ ಹಂಪ್ಸ್ ಅಳವಡಿಸಬೇಕು ಈ ಸಮಸ್ಯೆ ಬಗೆಯರಿದಿದ್ದಲ್ಲಿ ಎಲ್ಲಾ ಗ್ರಾಮಸ್ಥರನ್ನು ಸೇರಿಸಿ ಜನಾಗ್ರಹ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಸ್ಥಳಿಯ ನಿವಾಸಿಗಳ ಸಹಿ ಸಂಗ್ರಹ ಮಾಡಿ ಬೋಳಿಯಾರ್ ಗ್ರಾಮ ಪಂಚಾಯತ್ ಪಿ.ಡಿ.ಓ ಅಧಿಕಾರಿಯಲ್ಲಿ ಮನವಿ ಮಾಡಲಾಯಿತು ಇದಕ್ಕೆ ಸ್ಪಂದಿಸಿದ ಮಾನ್ಯ ಅಧಿಕಾರಿ ಕೂಡಲೇ ಮಾಡಿಸಿ ಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರರಾದ ರಹಿಮಾನ್ ಬೋಳಿಯಾರ್, ಬಿಂದಾಝ್ ಪ್ರೆಂಡ್ಸ್ ಅಧ್ಯಕ್ಷರಾದ ಬದ್ರುದ್ದೀನ್ ,ನೇತಾಜಿ ಆಟೋ ಪಾರ್ಕ್ ಅಧ್ಯಕ್ಷರಾದ ಝೈನುದ್ದೀನ್, ರಂತಡ್ಕ ಸ್ಥಳಿಯ ನಿವಾಸಿ ರಾಜ್ ಕುಮಾರ್ ಹಾಗೂ ವೆಲಂಕಣಿ ಕಟ್ಟಡ ಮಾಲಕರಾದ ಲೋರೆನ್ಸ್ ಡಿ.ಸೋಜಾ,ಸವಾದ್ ರಂತಡ್ಕ ಉಪಸ್ಥಿತರಿದ್ದರು.

Releated Posts

ಸಹೃದಯಿ ಸಮಾಜಸೇವಕ ಬಿ.ಎ. ಮೊಯ್ದಿನ್ ಬಾವಾ ವಿಧಾನಸಭೆ ಪ್ರವೇಶಿಸಬೇಕೆಂಬ ಜನಮನದ ಆಶಯ

ಬಿ.ಎ.ಮೊಯ್ದಿನ್ ಬಾವಾ ಎಂಬ ಸಹೃದಯಿ ನಾಯಕ ಈಗ ಇಡೀ ರಾಜ್ಯಾದ್ಯಂತ ತಮ್ಮದೇ ಆದ ಅಭಿಮಾನಿ ವರ್ಗವನ್ನು ಹೊಂದಿದ್ದಾರೆ. ಇದಕ್ಕೆ ಕಾರಣ ಅವರ ಸಹೃದಯಿ ಮನಸ್ಸು…

ByByshanmedianewsDec 23, 2025

ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ : ಘಟಾನುಘಟಿ ನಾಯಕರುಗಳ ಭವಿಷ್ಯ ಡಿಸೇಂಬರ್ 24 ಕ್ಕೆ ನಿರ್ಧಾರ

ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ : ಘಟಾನುಘಟಿ ನಾಯಕರುಗಳ ಭವಿಷ್ಯ ಡಿಸೇಂಬರ್ 24 ಕ್ಕೆ ನಿರ್ಧಾರ ಇತ್ತೀಚೆಗೆ ಮೇಲ್ದರ್ಜೆ ಗೆರಲ್ಪಟ್ಟ ಬಜ್ಪೆ ಪಟ್ಟಣ ಪಂಚಾಯತ್,…

ByByshanmedianewsDec 22, 2025

ಸಮಾಜಸೇವೆಯ ಸಾರ್ಥಕ ಪ್ರತೀಕ ಡಾ. ಅಲ್ ಹಾಜ್ ಯು.ಟಿ ಇಫ್ತಿಕಾರ್ ಅಲಿ ಫರೀದ್ – ಶಿಕ್ಷಣ, ವೈದ್ಯಕೀಯ ಹಾಗೂ ಮಾನವೀಯ ಸೇವೆಯಲ್ಲಿ ಅಪೂರ್ವ ಕೊಡುಗೆ

ಡಾ! ಅಲ್ ಹಾಜ್ ಯು.ಟಿ ಇಫ್ತಿಕಾರ್ ಅಲಿ ಫರೀದ್. ಈ ಹೆಸರನ್ನು ಕೇಳದವರು ಯಾರೂ ಇಲ್ಲ. ಕರ್ನಾಟಕ ರಾಜ್ಯದ ಅತ್ಯಂತ ಪ್ರಭಾವಿ ಶಾಸಕರಾಗಿದ್ದ ದಿವಂಗತ…

ByByshanmedianewsDec 22, 2025

ಉಮೀದ್ ಪೋರ್ಟಲ್ ಸಮಸ್ಯೆ: ವಕ್ಫ್ ಆಸ್ತಿ ಅಪ್ಲೋಡ್ ಗಡುವು ವಿಸ್ತರಣೆಗಾಗಿ AIMPLB ನಿಯೋಗದಿಂದ ಕೇಂದ್ರ ಸಚಿವರಿಗೆ ಮನವಿ

ಅಖಿಲ ಭಾರತ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‌ನ (AIMPLB) ಉನ್ನತ ಮಟ್ಟದ ನಿಯೋಗವು ಕೇಂದ್ರ ಅಲ್ಪಸಂಖ್ಯಾತ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿಯಾಗಿ, ವಕ್ಫ್…

ByByshanmedianewsDec 12, 2025

Scroll to Top